Sunday, November 30, 2008

ಉಚ್ಚಂಗಿ ಊರಿನ ಪರಿಚಯ

ಅನೇಕರು ಈ ಬ್ಲಾಗನ್ನು ನೋಡಿ ಉಚ್ಚಂಗಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎನ್ನುತ್ತಿದ್ದರು.ಆದ್ದರಿಂದ ಈ ತಿಂಗಳ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನದೇ ಲೇಖನದ ಹಾಳೇಯನ್ನು ಪೋಟೋ ತೆಗೆದು ಇಲ್ಲಿ ಹಾಹಿದ್ದೇನೆ.click over photo to see enlarged image.

ಅಂದಹಾಗೆ ತುಷಾರದಲ್ಲಿ ಈ ತಿಂಗಳು ಹಾಸನಜಿಲ್ಲೆಗೆ ಸಂಬಂಧಿಸಿದ ಸಮೃದ್ಧ ಮಾಹಿತಿಯಿದೆ.ಸಾಧ್ಯವಾದರೆ ಓದಿ.

Monday, November 24, 2008

ಉಚ್ಚಂಗಿಯ ವಶಿಷ್ಠ ಗೋತ್ರದ ದಿ//ರಾಮಭಟ್ಟರ ವಂಶಸ್ಥರು





ಪ್ರಿಯರೆ ನಮಸ್ಕಾರ ಹೇಗಿದ್ದೀರಿ

ನಾವು ಉಚ್ಚಂಗಿಯ ವಶಿಷ್ಠ ಗೋತ್ರದ ದಿ//ರಾಮಭಟ್ಟರ ವಂಶಸ್ಥರು ಪ್ರತಿವರ್ಷವೂ ಕಾರ್ತಿಕಮಾಸದಲ್ಲಿ ನೆರವೇರಿಸುವ ರುದ್ರಾಭಿಷೇಕ ಮಹೋತ್ಸವಕ್ಕೆ ದಿನಾಂಕ ೨೩/೧೧/೨೦೦೮ ಭಾನುವಾರದಂದು
ಭಾಗವಹಿಸಲು ಉಚ್ಚಂಗಿಗೆ ತೆರಳಿದ್ದೆವು.ಗೌರಿ ಹಬ್ಬದಲ್ಲಿ ಕಂಡ ಪ್ರಕೃತಿಗೂ ಇಂದಿನ ಪ್ರಕೃತಿಗೂ ಬಹಳಷ್ಟು ವ್ಯತ್ಯಾಸವಿತ್ತು.ಮುಂಗಾರುಮಳೆಯಲ್ಲಿ ಮಿಂದ ನಿಸರ್ಗ ಅಂದು ಹಸಿರನ್ನು ಹೊದ್ದಿದ್ದರೆ ಇಂದು ಪಚ್ಚೆತೆನೆಗಳು ಚಿನ್ನದ ಬಣ್ಣಕ್ಕೆ ತಿರುಗಿದ್ದವು.ನಿಸರ್ಗದಲ್ಲಿ ಲವಲವಿಕೆಯಿತ್ತು.ವಾತಾವರಣ ತಿಳಿಯಾಗಿತ್ತು.
ಚಳಿ ಮೆಲ್ಲನೆ ಕಾಲಿಡುತ್ತಿತ್ತು.ಕರೆಂಟಿನ ವಿಷಯ ನಿಮಗೆ ಗೊತ್ತೇಯಿದೆಯಲ್ಲ!




ಶ್ರೀ ರಾಮದೇವರಿಗೆ ಪಂಚಾಮೃತ ಅಭಿಷೇಕ,ಏಕದಶವಾರ,ರುದ್ರಾಭೀಷೇಕ,ಸಹಿತ ಅಷ್ಟೋತ್ತರ ಸಂಖ್ಯೆ ಶಂಖ,ಕ್ಷೀರಾಭೀಷೇಕ ಪೂಜೆ,ಮಹಾಮಂಗಳಾರತಿ,ಬ್ರಾಹ್ಮಣ ಸುವಾಸಿನಿಯರಿಗೆ ಅನ್ನಸಂತರ್ಪಣೆ ಇವು ಬೆಳಗಿನ ಕಾರ್ಯಕ್ರಮಗಳು.ಇದೇ ಸಂದರ್ಭದಲ್ಲಿ ಗೋತ್ರದ ಹಿರಿಯರಾದ ಶ್ರೀ ಮಂಜುನಾಥಮೂರ್ತಿ
ದಂಪತಿಗಳನ್ನು ಸನ್ಮಾನಿಸಲಾಯಿತು.ಸುಮಾರು ೨೦೦ ಮಂದಿ ದಿನ ಉಚ್ಚಂಗಿಯ ದೇಗುಲಕ್ಕೆ ಭೇಟಿನೀಡಿದ್ದಾರೆ.





ರಾತ್ರಿ ಸತ್ಯಗಣಪತಿ ದೇವರಿಗೆ "ಮಹಾರಂಗಪೂಜೆ" ಎಲ್ಲರನ್ನೂ
ಮಂತ್ರಮುಗ್ದರನ್ನಾಗಿಸಿತು.ಸತ್ಯಗಣಪತಿ ದೇವರ ಮುಂದೆ ಸಾಲಾಗಿ ಹಚ್ಚಿಡಲಾಗಿದ್ದ ಹಣತೆಗಳು
೧೦೧ ತೆಂಗಿನಕಾಯಿಯ ಸಂಕಲ್ಪ ಸೇವೆ ಇಲ್ಲಿನ ದೇಗುಲದಲ್ಲಿ ನಡೆದ ವಿಶಿಷ್ಟ ಆಚರಣೆ.ಧರ್ಮಸ್ಥಳ,ಸುಬ್ರಹ್ಮಣ್ಯ ಹಾಗು ಕೇರಳದ ದೇಗುಲಗಳ ದೀಪಗಳ ಸಾಲು ನೆನಪಿಗೆ ಬಂತು.
ಸೋಮವಾರ ಬೆಳಿಗ್ಗೆ ಉಚ್ಚಂಗಿಯ ಯು.ಎಸ್.ನರಸಿಂಹಮೂರ್ತಿ ಮಕ್ಕಳು ಶ್ರೀ ರಾಮೇಶ್ವರ ದೇಗುಲದಲ್ಲಿ ಅಭಿಷೇಕ ನೆರವೇರಿಸಿ ಬ್ರಾಹ್ಮಣ ಸುವಾಸಿನಿಯರಿಗೆ ಅನ್ನಸಂತರ್ಪಣೆ ನೆರವೇರಿಸಿದರು.

ಮತ್ತಷ್ಟು ಚಿತ್ರಗಳು ಸಧ್ಯದಲ್ಲೇ ಅಪ್ಲೋಡ್ ಮಾಡುತ್ತೇನೆ.

ನಿಮ್ಮ ಸಲಹೆ ಸೂಚನೆಗಳ ನಿರೀಕ್ಷೆಯಲ್ಲಿ
ಅಶೋಕ ಉಚ್ಚಂಗಿ
ಮೈಸೂರು.